ಗುರುದೇವ

ಅಂತರಂಗದಿ ಕರುಣವಿರಿಸುವ
ಅಂತರಾತ್ಮ ವಿಚಾರನೆ
ಭ್ರಾಂತಿಹರ ಅದ್ವೈತ ಸಿದ್ಧನೆ
ಸ್ವಾಮಿ! ಚಿಂತವಿದೂರನೇ

ನಿಮ್ಮ ನುಡಿಗಳ ಕೇಳಿ ತಣಿದೆನು
ಸರಿ ಇದೆನ್ನುತ ತಿಳಿದೆನು
ಕರುವು ತಾಯನು ಅಗಲಿದಂದದಿ
ಏನೊ ಬಳಲುತಲಿರುವೆನು

ಹಿಂದು ಮುಂದುಗಳೊಂದನರಿಯದೆ
ಸುತ್ತ ನೋಡುತಲಿರುವೆನು
ದ್ವಂದ್ವಭಾವವನಳಿಸಲಾರದೆ
ನಿರುತ ಯೋಚಿಸುತಿರುವೆನು

ಸಗುಣ ನಿರ್ಗುಣ ಸರ್ವವ್ಯಾಪ್ತನ
ಸಚ್ಚಿದಾನಂದಾತ್ಮನ
ಅಗಣಿತನ ಆ ವೇದಪುರುಷನ
ತಿಳಿಯಲಾರದೆ ಸೋತೆನು

ಅಣುವು ಮಹತುಗಳೊಳಗೆ ತುಂಬಿಹ
ವಿಶ್ವಶಕ್ತಿಗೆ ಮಣಿವೆನು
ಮುನಿಗಣಸ್ತುತ ಘನ ಮಹಾತ್ಮನೆ
ಭಜನೆ ಮಾಡುತಲಿರುವೆನು

ಒಮ್ಮೆ ಕಾಂತಿಯ ಕಡಲ ಕಾಂಬೆನು
ಒಮ್ಮೆ ತಳಮಳಗೊಂಬೆನು
ಒಮ್ಮೆ ಹರುಷದಿ ನಲಿಯುತಿರುವೆನು
ಒಮ್ಮೆ ಕಂಬನಿಗರೆವೆನು

ನಿಮ್ಮ ತತ್ವವನರಿಯದಿರ್ದೊಡೆ
ತನ್ಮಯತ್ವವನರಿವೆನೆ?
ಮಾನ್ಯ ಓ ಗುರುದೇವ ನಿಮ್ಮನು
ಭಗಿನಿ ಜನಕಜೆ ಮರೆವೆನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆಲ್ಲೋ ನಾನೆಲ್ಲೋ ದೂರದೂರ
Next post ಸತ್ಯದ ನೆತ್ತಿಯ ಮೇಲೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys